Saturday, 16 September 2017

ಹಣವಿಲ್ಲದೆ ಹಣತೆ ಸ್ವರ್ಶ ಕೋಡ ದೊರೆಯದ ಸ್ಥಿತಿಗೆ ಬಂದುನಿಂತಿದೆ 'ಮಂತ್ರಾಲಯದ ಗುರು ರಾಯರ ಆಲಯ'

ದಿನಕ್ಕೆ ಸಾವಿರಾರು ಭಕ್ತಾದಿಗಳು ಸ್ವಂತ ವಾಹನ, ಬಸ್, ಹಾಗೂ ರೈಲು ಮುಂತಾದ ವಾಹನಗಳ ಮೂಲಕ ನೂರಾರು ಕಿ.ಮೀ ದೂರದಿಂದ ಗುರುರಾಘವೇಂದ್ರರ (ಪೂಜೆ) ದರ್ಶನಕ್ಕಾಗಿ ಬರುತ್ತಾರೆ.




ಶ್ರೀ ಗುರು ರಾಘವೇಂದ್ರ ಸ್ವಾಮಿಗಳು(೧೫೯೫-೧೬೭೧), ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವಸಂನ್ಯಾಸಿಗಳಲ್ಲಿ ಪ್ರಮುಖರು. ಅವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯಾಸರಾಯರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ.

ಇವರ ಮೂಲ ಬೃಂದಾವನವು (ಸಶರೀರ) ಈಗಿನ ಆಂಧ್ರ ಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಕರ್ನಾಟಕದ ರಾಯಚೂರಿನಿಂದಸುಮಾರು ೧ ಘಂಟೆ ಪ್ರಯಾಣ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೆಟ್ಟಿ ಕೊಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಗಿವರೆಗೂ ಭವ್ಯ ಆರಾಧನೆ ನಡೆಯುತ್ತದೆ.




ಆಲಯದ ಪ್ರಥಮ ಭಾಗದಲ್ಲಿ ಮಾಂಚಾಲಮ್ಮನ ಗುಡಿ ಕಾಣಿಸುತ್ತದೆ ಜನ ಕಡಿಮೆಇದ್ದರೂ ಕೂಡ ಅಲ್ಲಿ ಎರಡು ಕ್ಯೂ ಇದೆ ಒಂದರಲ್ಲಿ ಹಣಪಾವತಿಸಬೇಕು ಹಣನೀಡದೆ ನಾನು ಸಾಮಾನ್ಯ ಕ್ಯೂ ನಲ್ಲೇ ಹೋಗುತ್ತೇನೆ ಎಂದರೆ ನಮಗೆ ಮಂಗಳಾರತಿ ಇಲ್ಲ, ಬಟ್ಟೂಸಹ ಇಲ್ಲ, ಕೊನೆಯ ಪಕ್ಷ ಅಲ್ಲಿಯ ಪೂಜಾರಿಗಳು ಹೆಚ್ಚುಹೋತ್ತು ನಿಲ್ಲಲೂ ಬಿಡುವುದಿಲ್ಲ, ಅಲ್ಲಿ ಎಲ್ಲರಿಗೂ ಸಮಾನವಾದ ಒಂದೇ ಒಂದು ವಸ್ತು ಇದೆ ಅದೇ ಹುಂಡಿ.

ಇನ್ನು ರಾಯರ ದರ್ಶನದಲ್ಲಿಯೂ ಸಮಾಧಾನ ಎನ್ನಿಸಲಿಲ್ಲ ಅಲ್ಲಿಯೂ ಎರಡು ರೂಟ್. ಹಣ ಕೊಟ್ಟವರಿಗೆ ಹತ್ತಿರದಿಂದ ದರ್ಶನ, ಮಂಗಳಾರತಿ ಮತ್ತು ಅಕ್ಷತೆಯ ಯೋಗ. ಹಣ ಪಾವತಿಸದೇ ಬಂದವರು ದೂರದಿಂದಲೇ ಕೈ ಮುಗಿದು ಪಕ್ಕದಲ್ಲೇ ಇರುವ  ಹುಂಡಿಗೆ ಹಣ ಹಾಕುವುದಾದರೆ ಹಾಕಿ ಹೊರನಡೆಯಬೇಕು.

ಪಕ್ಕದಲ್ಲೇ ಮತ್ತೊಂದು ಭಾಗದಲ್ಲಿ ಸುಮಾರು ತಲೆಮಾರುಗಳ ಹಿಂದಿನ ಗುರುಗಳ ಮಂಟಪವಿದೆ ಅಲ್ಲಿಯಂತೂ ಮಂಗಳಾರತಿ ತಟ್ಟೆಗೆ ಹಣ ಹಾಕದೇ ಹೋದವರನ್ನು ಮಸಸ್ಸಿನಲ್ಲೇ ಬೈದುಕೊಳ್ಳುವ ಕೆಲ ಪೂಜಾರಿಗಳನ್ನು ಕಂಡು ಅಚ್ಚರಿಯಿಂದ ಹೊರಬಂದರೆ ಪಂಚ ತೀರ್ಥ ನೀಡುತ್ತಾರೆ ನಿಜಕ್ಕೂ ಅದು ಪಂಚಾಂಮೃತವೇ ಹೌದು.

ಇನ್ನು ಅನ್ನದಾನವನ್ನು ಎಷ್ಟು ಹೊಗಳಿದರು ಸಾಲದು, ಅದ್ಭುತವಾದ ಊಟ ಉಚಿತವಾಗಿ, ಎಲ್ಲರಿಗೂ ಸಮನಾಗಿ ನೀಡಲಾಗುತ್ತದೆ.

ದೇವಸ್ಥಾನದ ಹೊರಭಾಗದಲ್ಲಿ ಡಿ ಎಸ್ ಎಲ್ ಆರ್ ಕ್ಯಾಮರಾ ಹಿಡಿದು ಒಂದು ಸಮೂಹವೇ ನಿಂತಿರುತ್ತದೆ ಐದೇ ನಿಮಿಷಕ್ಕೆ ಒಂದುಕಾಪಿ ಕೊಡುತ್ತೇವೆ ಕೇವಲ 20 ರೂಳುಮಾತ್ರ ಎಂದು ಹತ್ತಿರಕ್ಕೆ ಬರುತ್ತಾರೆ. ಎಲ್ಲವೂ ಹೊಸತು.


ತುಂಗಾಭದ್ರ ನದಿಗೆ ಸಾಗುವಾಗ ಸಿಗುವ ತೇಲು ಬತ್ತಿ ಮಾರುವವರ ಸಮೂಹ "ಅಣ್ಣ ಒಂದೇ ಒಂದು ತೆಗೆದುಕೊಳ್ಳಿ" ಎನ್ನುತ್ತಾ ಹೇಳುತ್ತಾ ನದಿಯ ಅತ್ತಿರದವರೆಗೂ ಬಂದು ಕೆಲೊಮ್ಮೆ ನಿರಾಶರಾಗಿ ಹೋಗುತ್ತಾರೆ.

ದೇವಸ್ಥಾನದ ಹೊರೆ ಏನೇ ತೆಗೆದುಕೊಂಡರೂ ಹೈ ರೇಟ್. ಎಂ.ಆರ್.ಪಿ ಲೆಕ್ಕಕ್ಕೇ ಇಲ್ಲ ಅವರು ಕೇಳಿದಷ್ಟು ಕೊಟ್ಟರೆ ಕೊಡುತ್ತಾರೆ ಇಲ್ಲವಾದರೆ ಒರಟು ಭಾಷೆಯಲ್ಲೇ ಕಳುಹಿಸುತ್ತಾರೆ.

ಕುಡಿಯುವ(ಬೋರ್ವೆಲ್) ನೀರಿಗೂ ಇಲ್ಲಿ ಹಣ ಪಾವತಿಸಬೇಕು...

ಅಬ್ಬ ದರ್ಶನ ಅದ್ಭುತವಾಗಿ ಮಾಡಿದೆವು ಎಂದು ಹಿಂತಿರುಗಿ ಬರುವಾಗ ಅಲ್ಲಿನ ಸಾರಿಗೆ ವ್ಯವಸ್ಥೆ ಎಂದರೆ ಆಟೋ ಚಾರ್ಜ್‌ ಕೇವಲ 20ರೂ ದೇವಸ್ಥಾನದದಿಂದ ಸುಮಾರು 15-20 ಕಿ.ಮೀ ದೂರದ ರೈಲ್ವೇ ಸ್ಟೇಷನ್ ತಲುಪಲು.


ಶ್ರೀ ರಾಘವೇಂದ್ರ ಸ್ವಾಮಿಗಳ ಕೃತಿರತ್ನಗಳುಸಂಪಾದಿಸಿ


ಶ್ರುತಿ ಪ್ರಸ್ಥಾನ

೧. ಋಗ್ವೇದವಿವೃತಿಃ *

೨. ಯಜುರ್ವೇದವಿವೃತಿಃ *

೩. ಸಾಮವೇದವಿವೃತಿಃ *

೪. ಮಂತ್ರಾರ್ಥಮಂಜರೀ

೫. ಪುರುಷಸೂಕ್ತಮಂತ್ರಾರ್ಥಃ

೬. ಶ್ರೀಸೂಕ್ತಮಂತ್ರಾರ್ಥಃ *

೭. ಮನ್ಯುಸೂಕ್ತಮಂತ್ರಾರ್ಥಃ *

೮. ಅಂಭೃಣೀಸೂಕ್ತಮಂತ್ರಾರ್ಥಃ *

೯. ಬಳಿತ್ಥಾಸೂಕ್ತಮಂತ್ರಾರ್ಥಃ *

೧೦. ಹಿರಣ್ಯಗರ್ಭಸೂಕ್ತ ವ್ಯಾಖ್ಯಾನಮ್


ಉಪನಿಷತ್ ಪ್ರಸ್ಥಾನ

೧೧. ಈಶಾವಾಸ್ಯೋಪನಿಷತ್ ಖಂಡಾರ್ಥಃ

೧೨. ತಲವಕಾರೋಪನಿಷತ್ ಖಂಡಾರ್ಥಃ

೧೩. ಕಾಠಕೋಪನಿಷತ್ ಖಂಡಾರ್ಥಃ

೧೪. ಷಟ್ಪ್ರಶ್ನೋಪನಿಷತ್ ಖಂಡಾರ್ಥಃ

೧೫. ತೈತ್ತಿರಿಯೋಪನಿಷತ್ ಖಂಡಾರ್ಥಃ

೧೬. ಆಥರ್ವಣೋಪನಿಷತ್ ಖಂಡಾರ್ಥಃ

೧೭. ಮಾಂಡೋಕ್ಯೋಪನಿಷತ್ ಖಂಡಾರ್ಥಃ

೧೮. ಶ್ರೀಮನ್ಮಹೈತರೇಯೋಪನಿಷನ್ಮಂತ್ರಾರ್ಥಃ *

೧೯. ಛಾಂದೋಗ್ಯೋಪನಿಷತ್ ಖಂಡಾರ್ಥಃ

೨೦. ಬೃಹದಾರಣ್ಯಕೋಪನಿಷತ್ ಖಂಡಾರ್ಥಃ


ಸೂತ್ರಪ್ರಸ್ಥಾನ

೨೧. ಶ್ರೀಮನ್ನ್ಯಾಯಸುಧಾಪರಿಮಳಃ

೨೨. ಅಣುಭಾಷ್ಯ ವಾಖ್ಯಾ ತತ್ವಮಂಜರೀ

೨೩. ತತ್ತ್ವಪ್ರಕಾಶಿಕಾ ಭಾವದೀಪಃ

೨೪. ತಾತ್ಪರ್ಯಚಂದ್ರಿಕಾಪ್ರಕಾಶಃ

೨೫. ತಂತ್ರದೀಪಿಕಾ

೨೬. ನ್ಯಾಯಮುಕ್ತಾವಳಿಃ


ಮೀಮಾಂಸಾಶಾಸ್ತ್ರ ಗ್ರಂಥ

೨೭. ಭಾಟ್ಟಸಂಗ್ರಹಃ


ಪುರಾಣಪ್ರಸ್ಥಾನ

೨೮. ಶ್ರೀಕೃಷ್ಣಚಾರಿತ್ರ್ಯ ಮಂಜರೀ


ಗೀತಾ ಪ್ರಸ್ಥಾನ

೨೯. ಶ್ರೀಮದ್ಭಗವದ್ಗೀತಾಭಾಷ್ಯ ಪ್ರಮೇಯದೀಪಿಕಾ ಭಾವದೀಪಃ

೩೦. ಗೀತಾತಾತ್ಪರ್ಯನ್ಯಾಯದೀಪಿಕಾ ಭಾವದೀಪಃ

೩೧. ಗೀತಾರ್ಥಸಂಗ್ರಹಃ (ಗೀತಾವಿವೃತಿಃ)


ಪ್ರಕರಣ ಗ್ರಂಥಗಳು

೩೨. ಮಾಯಾವಾದ ಖಂಡನ ಟೀಕಾಟಿಪ್ಪಣೀ *

೩೩. ಮಿಥ್ಯಾತ್ವಾನುಮಾನ ಖಂಡನ ಟೀಕಾಟಿಪ್ಪಣೀ *

೩೪. ಉಪಾಖಂಡನ ಟೀಕಾ ಟಿಪ್ಪಣೀ *

೩೫. ಶ್ರೀವಿಷ್ಣುತತ್ತ್ವವಿನಿರ್ಣಯ ಟೀಕಾ ಭಾವದೀಪಃ

೩೬. ತತ್ವೋದ್ಯೋತ ಟೀಕಾಟಿಪ್ಪಣೀ *

೩೭. ತತ್ತ್ವಸಂಖ್ಯಾನಂ ಟೀಕಾ ಭಾವದೀಪಃ *

೩೮. ತತ್ತ್ವವಿವೇಕ ಟೀಕಾ ಭಾವದೀಪಃ

೩೯. ಕಥಾಲಕ್ಷಣ ಟೀಕಾ ಭಾವದೀಪಃ

೪೦. ಕರ್ಮನಿರ್ಣಯ ಟೀಕಾ ಭಾವದೀಪಃ

೪೧. ಪ್ರಮಾಣಲಕ್ಷಣ ಟೀಕಾ ಭಾವದೀಪಃ


ಇತರ ಗ್ರಂಥಗಳ ಟಿಪ್ಪಣಿಗಳು

೪೨. ಪ್ರಮಾಣ ಪದ್ಧತಿ ಟಿಪ್ಪಣಿ ಭಾವದೀಪಃ

೪೩. ತರ್ಕತಾಂಡವ ಟೀಕಾ ನ್ಯಾಯದೀಪಃ

೪೪. ವಾದಾವಳೀ ಟಿಪ್ಪಣೀ

೪೫. ಪ್ರಮೇಯ ಸಂಗ್ರಹಃ


ಇತಿಹಾಸ ಪ್ರಸ್ಥಾನ

೪೬. ಶ್ರೀರಾಮಚಾರಿತ್ರ್ಯ ಮಂಜರೀ

೪೭. ಶ್ರೀಮನ್ಮಹಾಭಾರತತಾತ್ಪರ್ಯ ನಿರ್ಣಯ ಭಾವಸಂಗ್ರಹಃ

೪೮. ಪ್ರಮೇಯನವಮಾಲಿಕೆಯ ಗೂಢಭಾವಪ್ರಕಾಶಿಕಾ (ಅಣುಮಧ್ವವಿಜಯಃ)


ಸದಾಚಾರ ಪ್ರಸ್ಥಾನ

೪೯. ಪ್ರಾತಃ ಸಂಕಲ್ಪಗದ್ಯಮ್

೫೦. ಸರ್ವಸಮರ್ಪಣಗದ್ಯಮ್

೫೧. ಭಗವದ್ಧ್ಯಾನಮ್

೫೨. ತಿಥಿನಿರ್ಣಯಃ

೫೩. ತಂತ್ರಸಾರ ಮಂತ್ರೋದ್ಧಾರಃ


ಸ್ತೋತ್ರ ಪ್ರಸ್ಥಾನ

೫೪. ರಾಜಗೋಪಾಲಸ್ತುತಿಃ

೫೫. ನದೀತಾರತಮ್ಯ ಸ್ತೋತ್ರಮ್

೫೬. ದಶಾವತಾರಸ್ತುತಿಃ


ಸುಳಾದಿ ಮತ್ತು ಗೀತೆಗಳು

೫೭. ಇಂದು ಎನಗೆ ಗೋವಿಂದ

೫೮. ಮರುತ ನಿನ್ನಯ ಮಹಿಮೆ - ಸುಳಾದಿ


* ಈ ಗುರುತು ಇರುವ ಕೃತಿಗಳು ಸಧ್ಯಕ್ಕೆ ಉಪಲಬ್ಧವಿಲ್ಲ


ಮೇಲ್ಕಂಡ ಕೃತಿಗಳ ಅಧ್ಯಯನಕ್ಕೆ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಲ್ಲಿ ಅವಕಾಶವಿದೆ.


ಸಂಪರ್ಕ ವಿಳಾಸ ಇಂತಿದೆ:

ಶ್ರೀಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ

ಶ್ರೀರಾಘವೇಂದ್ರಸ್ವಾಮಿಗಳ ಮಠ

ಮಂತ್ರಾಲಯ-೫೧೮ ೩೪೫

ಕರ್ನೂಲು ಜಿಲ್ಲೆ, ಆಂಧ್ರಪ್ರದೇಶ

                                                                                            ಹೆಚ್ ರಾಜು ಕೋಡಿಹಳ್ಳಿ.

Tuesday, 5 September 2017

SR Hi-tech Vision, Siri Live Channel & Siri Soundarya Magazine New Office Opening Ceremony

SR Hi-tech Vision, Siri Live Channel & Siri Soundarya Magazine New Office Opening Ceremony Program held By Dr Suresh Chikkanna