Monday, 23 October 2017

ದೀಪಾವಳಿ ಮೆರವಣಿಗೆ ಅಲ್ಲ ಅಲೆದಾಟ...

ಅಂಗೈ ಅಗಲದ ಆಧುನಿಕ ಕೋಳಿಯೊಂದು ಸರಿಯಾಗಿ 5ಘಂಟೆಗೆ ಹಾಸಿಗೆಯ ಪಕ್ಕದಲ್ಲಿ ಕಿರುಚಿಕೊಂಡ ಕಾರಣ ಥಟ್ಟನೆ ಎದ್ದವನೆ ಯುದ್ಧ ಘೋಷಣೆ ಯಾದೊಡನೆ ಸೈನಿಕರು ಸಿದ್ದರಾಗುವ ರೀತಿ. ದಡಬಡಗುಟ್ಟುತ್ತಾ ಮನೆಯವರನ್ನೆಲ್ಲಾ ಎಬ್ಬಿಸಿ ರಡಿಯಾದೆ. ಸಮಯ ಸರಿಯಾಗಿ 6 ಘಂಟೆ ಬಸ್ ಹತ್ತಿ ಮತ್ತೆ ಜಾರಿದೆ ನಿದ್ರೆಗೆ. 7 ಗಂಟೆಗೆ ಬೋನ್ ಮಿಲ್ ನಲ್ಲಿ ರಘು ಅಪ್ಪಾಚಿ ಗಾಡಿಯಲ್ಲಿ ಬಂದವನೇ "ಮಗ ಹತ್ತೋ" ಎಂದ. ನಾನು ಹತ್ತಿ ಕುಳಿತು ಪುನೀತನಿಗೆ ಕಾಲ್ ಮಾಡಿ ಮಾಡಿ ಸಾಕಾದೆ ಕೊನೆಗೂ ಅವನೇ ಹಿಂತಿರುಗಿ ಕಾಲ್ ಮಾಡಿದ ರಿಸೀವ್ ಮಾಡಿ "ಲೋ ಎಲ್ಲೋ ಹೋಗಿದ್ದೆ" ಎಂದು ಕೋಪದಿಂದ ಕೇಳಿದ್ದಕ್ಕೆ ಕ್ಷಮಾ
ಧ್ವನಿಯಿಂದ "ಮಗ ಸ್ನಾನ ಮಾಡ್ತಿದ್ದೆ ಕಣಲೋ ಈಗ ನೋಡ್ದೆ" ಎಂದ. ನಾನು ನಿಜ ಇರಬಹುದು ಎಂದುಕೊಂಡು "ಸರಿ ನಾವು ರಾಮನಗರ ರೂಟ್ ನೈಸ್ ರೋಡಿಂದ ಮುಂದೆ ಇರ್ತೀವಿ ನೀನು ಅಲ್ಲಿಗೆ ಬಂದ್ಬಿಡು" ಎಂದೆ ಮುಂದಿನ ದಾರಿಯೇ ಕಾಣದಷ್ಟು ಮಂಜು ಕವಿದಿದ್ದ ಆದಾರಿಯಲ್ಲಿ ಬೈಕ್ ಹೋಡಿಸುವುದೇ ಒಂದುತರಾ ಮಜವಾದರೆ ಆ ಚಳಿಗೆ ಟೀ, ದಮ್ಮು ಸಿಕ್ಕರೆ ಸಾಕಪ್ಪಾ ಎನ್ನಿಸುತ್ತಿತ್ತು ಮನಸ್ಸೊಳಗೆ.



ಅಂತೂ ನನ್ನ ಆಸೆ ನೆರವೇರಿತು. ಅಂಗಡಿ ಮುಂದೆಯೇ ಪುನೀತನಿಗೆ ಕಾಯುತ್ತಾ ಕುಳಿತವತಿಗೆ ಕ್ಷಣ ಮಾತ್ರದಲ್ಲಿ ಅವನು ಬಂದದ್ದು ಖುಷಿಯಾಯ್ತು. ಅಲ್ಲಿಂದ ರಾಮನಗರದ ರಾಮದೇವರ ಬೆಟ್ಟಕ್ಕೆ ಬಂದವರೆ ಅರಣ್ಯ ಇಲಾಖೆಯವಗೆ ಕಟ್ಟಬೇಕಿದ್ದ (ಒಬ್ಬರಿಗೆ ರೂ.25 ಒಂದು ದ್ವಿ ಚಕ್ರ ವಾಹನಕ್ಕೆ ರೂ.10) 25x3=75, 10x2=20 ಒಟ್ಟು ರೂ.95 ಗಳನ್ನು ಅಧಿಕಾರಿಗೆ ಕೊಟ್ಟೊ, ಬಿಲ್ ಕೇಳಿದ್ದಕ್ಕೆ ಕೊಟ್ಟರು ಇಲ್ಲದಿದ್ದರೆ ರೂ.95 ಅಧಿಕಾರಿಗಳ ಬೊಕ್ಕಸದ ಪಾಲಾಗುತ್ತಿತ್ತು. ಅಂತೂ ಸರಿಯಾಗಿ 10ಘಂಟೆಗೆ ಬೆಟ್ಟಕ್ಕೆ ಆಕಿದ್ದ ಮೆಟ್ಟಲುಗಳನ್ನು ಹತ್ತಲು ಶುರುಮಾಡಿದಾಗ ಅಲ್ಲಿ ನಿಂತಿದ್ದದ್ದ ಕೇವಲ 2 ಕಾರು, 5 ರಿಂದ 6 ದ್ವಿ ಚಕ್ರ ವಾಹನಗಳನ್ನು ನೋಡಿ ಅಯ್ಯೋ! ಯಾವುದೋ ಪ್ರಸಿದ್ಧ ಸ್ಥಳಕ್ಕೆ ಹೋಗುತ್ತಿರುವೆ ಎಂದುಕೊಡವನಿಗೆ ಸ್ವಲ್ಪ ಬೇಸರವಾದರೂ ಆ ಸಮಯದಲ್ಲಿ ನಿಸರ್ಗದ ಸವಿರುಚಿಸ ತೊಡಗಿತು. 400 ಮೆಟ್ಟಿಲುಗಳನ್ನೊಂದಿರುವ ಆ ದಾರಿಯಲ್ಲಿ
ಬಲಿಷ್ಟ ವಾದ ಭಲೆಯನ್ನೆಳೆದು ಕಾಯುತ್ತಿದ್ದ ಜೇಡರ ಗಳನ್ನು ನೋಡಿದರೆ ಎಂತಹವರಿಗೂ ಒಮ್ಮೆ ಎದೆ ಜುಮ್ ಎನ್ನಿಸುವುದು ಗ್ಯಾರಂಟಿ.
ಕೊನಗೂ ಮೆಟ್ಟಿಲುಗಳೇ ಇಲ್ಲದ ಮಣ್ಣಿನ ದಾರಿ ಸಿಕ್ಕಾಗ ದೇವಸ್ಥಾನದ ಪೂಜಾರಿ ಇನ್ನೂ ಬಂದಿಲ್ಲ ಎಂದು ಮುಂದೆ ತುಂಬಾ ಅಪಾಯಕಾರಿ ನಡಿಗೆಯ ಬಂಡೆಯೊಂದನ್ನು ಪಕ್ಕದಲ್ಲೇ ಆಕಿದ್ದ ಕಂಬಿಗಳ ಸಹಾಯದಿಂದ ಹತ್ತಿದೆವು.

Rama Devara Devastana

ಅಲ್ಲಿಂದ ಕಂಡದ್ದೆಲ್ಲಾ ಪ್ರಪಾತವೇ. ಕಿರುಚಾಟ, ಕೊಗಾಟ, ಕುಂತು ನಿಂತು ತೆಗೆದುಕೊಂಡೊ ಎಲ್ಲರ ಫೂಟೋ. ಅಂತು ಅಷ್ಟರಲ್ಲಿ ಎಲ್ಲರ ಹೊಟ್ಟಯಲ್ಲಿ ಉಷ್ಣಾಂಶ ಹೆಚ್ಚಾಗಿ ಹಸಿವು ನೀಗಿಸುವ ಸಲುವಾಗಿ ಅಲ್ಲಿಂದ ದೇವರ ಗುಡಿಗೆ ಹೋಗಿ ಕೈಮುಗಿದು ಹಿಂತಿರುಗುವಾಗ ಸಿಕ್ಕ 8ನೇ ತರಗತಿಯಲ್ಲಿ ಓದುತ್ತಿದ್ದ ಚಿಕ್ಕ ಐನೋರನ್ನೂ ಮತ್ತು ಅವರ

ಗೆಳೆಯರನ್ನು ರೇಗಿಸಿ, ಅಲ್ಲಿಂದ ಹೊರಟು ಬಂದವರಿಗೆ ಆಗತಾನೆ ಬರುತ್ತಿದ್ದ ಯಾತ್ರಿಗರು ಗುಂಪು ಗುಂಪಾಗಿ ಕಾಣತೊಡಗಿದರು. ಕೆಳಗಿಳಿದಾಗ ಪುನೀತ್ ಗೆಳೆಯ ಪ್ರವೀಣ್ ಮತ್ತು ತನ್ನ ಅತ್ತೆ ಮಗ ರಾರ್ತಿಕ ನೊಂದಿಗೆ ಸಿಕ್ಕಿ ತಿಂಡಿಗೆ ದಾರಿ ತೋರಿಸಿ ಜ್ಯೂಸ್ ಕೊಡಿಸಿ "ಕೆರೆಯೊಂದು ತುಂಬಿದೆ ಇಲ್ಲೆ ಪಕ್ಕದಲ್ಲಿ ಬನ್ನಿ ನೋಡಿ" ಎಂದರು ಸರಿ ಎಲ್ಲರ ಒಪ್ಪಿಗೆಯೊಂದಿಗೆ ಕೆರೆಗೆ ಬಂದು ಆ ಜಲರಾಶಿಯ ವೈಭವವನ್ನು ಕಣ್ದುಂಬಿಕೊಂಡು.



ಗೆಳೆಯರಿಗೆ ಬೀಳ್ಕೊಟ್ಟು ಕೆಂಗ್ಗಾಲ್ ಹನುಮಂತ ರಾಯರು ನಿರ್ಮಿಸಿದ ಹನುಮಂತನ ದೇವಾಲಯಕ್ಕೆ ಬಂದವರಿಗೆ ಕಲ್ಯಾಣಿಯಲ್ಲಿ ಕಾಲು ತೊಳೆದೊಡನೆ ನಾಮ ಇಟ್ಟವ ರೂ5/- ತೆಗೆದುಕೊಡು ಕಳುಹಿಸಿದ. ಜನ ಜಂಗುಳಿಯಲ್ಲಿ ಒಳಗೆ ಪ್ರವೇಶಿಸಿದವನಿಗೆ ಹನುಮನ ಮೂರ್ತಿ ನೋಡಿ ಎಂದಿಲ್ಲದ ಅಚ್ಚರಿ.
ಕೊನೆಗೆ ಹೆಚ್ಚು ಸಮಯ ವ್ಯಯಿಸದೆ ಬಿಡದಿಯ ನಿತ್ಯಾನಂದ ಸ್ವಾಮಿ ಪೀಟದಕಡೆ ಪಯಣ ಆರಂಭಿಸಿದವರಿಗೆ ಬಹುದೊಡ್ಡ ಅಚ್ಚರಿಯೇ ಕಾದಿತ್ತು ನಾಮ ಫಲಕವಿಲ್ಲದ ಗೇಟ್ ಒಳಗೆ ಹೋಗಿಯೇ ಬಿಟ್ಟೊ ವಾಚ್ ಮ್ಯಾನ್ ಪೀಠವನ್ನು ಖಚಿತ ಪಡಿಸಿ, ಒಳಗೆ ಹೋಗಲು ಐ.ಡಿ ಕೊಟ್ಟಿ ದೇವಾಲಯ ಮತ್ತು ಅನ್ನ ದಾಸೋಹದ ಮಳಿಗೆಯ ದಾರಿಯನ್ನು ತಿಳಿಸಿಕೊಟ್ಟ, ಎಷ್ಟು ನಡೆದರೂ ಬರಿ ಬಯಲು, ಅಲ್ಲಿ ಸ್ವಲ್ಪ ದೂರದಲ್ಲಿ ಜನಗಳು ಏನನ್ನೂ ಗುಡಿಸುತ್ತಿದ್ದದ್ದು ಕಾಣಿಸಿತು ಹತ್ತರಕ್ಕೆ ಬಂದು ನೋಡಿದರೆ ಅದು ನೆನ್ನೆ ರಾತ್ರಿ ಆಶ್ರಮ ದಲ್ಲಿ ಹೊಡೆದ ಪಟಾಕಿಯ ಕಾಗದದ ಚೂರುಗಳು ಎಲ್ಲವನ್ನೂ ದಾಟಿ ಹೋದವರಿಗೆ ಮತ್ತೊಬ್ಬ ಸೆಕ್ಯೂರಿಟಿಯವನು ಊಟ ಕಾಲಿಯಾಗುತ್ತಿದೆ ಮೊದಲು ಊಟಮಡಿ ನಂತರ ದೇವಾಲಕ್ಕೆ ಹೋಗಿ ಎಂದ ಬೊಫೆ ಸಿಸ್ಟಮ್ ನಲ್ಲಿ ಊಟಮುಗಿಸಿ ತಟ್ಟೆ ತೊಳೆದು ಪುನೀತನ ಮಾತು ತಿರಸ್ಕರಿಸಿ ದೇವಸ್ಥಾನದ ಕಡೆ ನಾನು ರಘು ನಡೆದೆವು ದೇವಸ್ಥಾನದ ಮುಂದೆ ದೀಪಾವಳಿ ಪ್ರಯುಕ್ತ ವಾಲಗದ ಸದ್ದಿನೊಡನೆ ನೂರಾರು ವಿದೇಶಿಯರ ಸಮಾಗಮದಲ್ಲಿ ಪೂಜೆ ನಡೆಯುತ್ತಿತ್ತು, ಎದುರಿಗೆ ರಾಜ ಗಾಂಭೀರ್ಯದಿಂದ ಉದ್ದನೆಯ ಕೂದಲುಬಿಟ್ಟು ಕುಳಿತು ನಗುಮುಖ ಬೀರುತ್ತಾ ಕಳಿತಿದ್ದ ನಿತ್ಯಾನಂದ ಸ್ವಾಮಿ ಯನ್ನು ನೋಡಿ ಕನಿಕರ ಭಾವದಿಂದ ನಾವೂ ನಗುಮುಖದಿ ಅರ್ಧ ಘಂಟೆ ಕಾಲ ಪೂಜೆ ನೋಡಿ ಸಂತೋಷ ದಿಂದ ಮೂವರೂ ಗೇಟಿನ ಕಡೆ ನಡೆದೆವು.