Friday, 22 December 2023

ದೊಡ್ಡಬಳ್ಳಾಪುರ ರೈತರು ಭ್ರಷ್ಟ ಮುಕ್ತ ಜೀವನನಡೆಸಲಿ

 ಮಾನ್ಯ ಶಾಸಕರಾದ ದೀರಜ್ ಮುನಿರಾಜು ರವರ ಆಡಳಿತ ಕ್ಪೇತ್ರವಾದ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 2023-2024 ನೇ ಸಾಲಿನ ರಾಗಿಬೆಳೆಗಾರರಿಂದ ರಾಗಿ ಖರೀದಿಸಲು ಸರ್ಕಾರ 01/01/2024ರಿಂದ 31/3/2024ರ ವರೆಗೆ ಗಡುವು ನೀಡಿದ್ದು ರೈತರಿಂದ ರಾಗಿಯನ್ನು ಗೋಡನ್ ಗೆ ಸಾಗಿಸುವ ಅಥವ ಒಪ್ಪಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಭ್ರಷ್ಟ ಚಟುವಟಿಕೆಗಳು ನಡೆಸದಿರಲು ಮಾನ್ಯ ಶಾಸಕರಾದ ದೀರಜ್ ಮುನಿರಾಜು ರವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೆನೆ.



ಹಿಂದಿನ ವರ್ಷ ರಾಗಿ ಖರೀದಿ ಅಧಿಕಾರಿಗಳು ನಡೆಸುತ್ತಿದ್ದ ಭ್ರಷ್ಟ ಚಟುವಟಿಕೆಗಳ ವಿವರವನ್ನು  ಈ ಹಿಂದಿನ ಶಾಸಕರ ಗಮನಕ್ಕೆ ತಂದರೂ ಸೂಕ್ತ ಕ್ರಮವಹಿಸಿ ರೈತರಿಗೆ ನ್ಯಾಯ ಕೊಡುವಲ್ಲಿ ವಿಫಲವಾಗಿದ್ದರು. ಒಂದು ವೇಳೆ ಈ ಬಾರಿಯೂ ಆ ರೀತಿಯ ವಾತಾವರಣ ಕಂಡುಬಂದಲ್ಲಿ ರೈತರ ಹಾಗೂ ನಮ್ಮನಿಮ್ಮೆಲ್ಲರ ನೆಚ್ಚಿನ ನಾಯಕರಾದ ದೀರಜ್ ಮುನಿರಾಜು ಅವರ ಗಮನಕ್ಕೆ ತರುವಂತೆ ದೊಡ್ಡಬಳ್ಳಾಪುರದ ಎಲ್ಲಾ ರೈತ ಭಾಂದವರಲ್ಲಿ ಮನವಿ ಮಾಡಿಕೊಳ್ಳುತ್ತೆನೆ..

ಹೆಚ್ ರಾಜು ಕೋಡಿಹಳ್ಳಿ.