Saturday, 21 March 2020

ಮಹಾಮಾರಿಗೂ ಮಹಾದೇವಿಗು ಅದ್ಭುತ ಸಂಬಂಧದ ಬೆಸುಗೆ ಹೆಣೆದವರು ಭಾರತೀಯರು...


ಒಂದು ಕಾಲದಲ್ಲಿ ಯಾವುದಾದರು ಪ್ರಾಂತ್ಯದಲ್ಲಿ ಈ ರೀತಿ ಕಾಯಿಲೆಗಳು ಬಂದರೆ ಅಲ್ಲಿನ ಜನ ಅದನ್ನು ಮಹಾ ಮಾರಿಯಮ್ಮ ಎಂದು ಆ ಕಾಯಿಲೆಗೆ ಹಿಟ್ಟ ಹೆಸರಿನಲ್ಲೇ ಒಂದು ದೇವಿಯ ಗುಡಿ ಕಟ್ಟಿ ಪೂಜಿಸುತ್ತಿದ್ದರು. ಉದಾ:- ಪ್ಲೇಗ್ ದೇಶವನ್ನು ಆವರಿಸಿದ  ಕಾಲದಲ್ಲಿ ಪಳಾಕಮ್ಮ ಎಂದು ಹೆಸರಿಟ್ಟು ಊರಿನ ಹೊರಗಡೆ ಗುಡಿ ಕಟ್ಟಿ ಪೂಜಿಸಿ ಅಲ್ಲಿ ಎಲ್ಲಾ ಮನೆಯವರು ಭಕ್ಷ್ಯ ಭೋಜನ ವನ್ನು ಸಲ್ಲಿಸುತ್ತಿದ್ದದ್ದು ವಾಡಿಕೆಯಾಗಿತ್ತು. ಇದಕ್ಕೆ ಕಾರಣ ಕಾಯಿಲೆ ಊರಿನ ಹೋಳಗೆ ಬರಬಾರದೆಂದು ಅಂದರೆ ಪ್ಲೇಗ್ ರೋಗವು ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾದ ಮೂಲಕ ಹರಡುತ್ತಿತ್ತು, ಈ ಬ್ಯಾಕ್ಟೀರಿಯಾವು ಮೊದಲಿಗೆ ಕೀಟ ಅಥವಾ ಕ್ರಿಮಿಕೀಟಗಳನ್ನು ಸೇರುತ್ತದೆ ನಂತರ ಆ ಕೀಟಗಳನ್ನು ತಿಂದ ಪ್ರಾಣಿಗಳಲ್ಲಿ ನಂತರ ಅದನ್ನು ತಿಂದ ಮಾನವನಲ್ಲಿ ಸೇರುತ್ತಿತ್ತು




  • ದೇಹದ ಹೊರ ಬರುವ ದ್ರವ್ಯಗಳಾದ ರಕ್ತ, ಗೋಣೆ ಮತ್ತು ಎಂಜಲು ಆರೋಗ್ಯ ವ್ಯಕ್ತಿಯ ಚರ್ಮವನ್ನು ಸಂಪರ್ಕಿಸಿದ್ದಾಗ ರೋಗ ಹರಡುವ ಸಾಧ್ಯತೆಗಳಿವೆ.
  • ನೇರ ಶಾರೀರಕ ಸಂಬಂಧದಿಂದ ಸೋಂಕಿತ ವ್ಯಕ್ತಿಯು ಸ್ಪರ್ಶಿಸುವುದರಿಂದ ಮತ್ತು ಲೈಂಗಿಕ ಸಂಪರ್ಕದಿಂದ ರೋಗ ಹರಡುತ್ತದೆ.
  • ಗಾಳಿಯಿಂದ ಹರಡುತ್ತದೆ. ರೋಗ ಉಂಟು ಮಾಡುವ ಸೂಕ್ಷ್ಮಜೀವಿಗಳು ರೋಗಿಯ ದೇಹದಿಂದ ಹೊರ ಬಂದು ಗಾಳಿಯಲ್ಲಿ ಸೇರಿಕೊಂಡು ಗಾಳಿಯನ್ನು ಕಲುಷಿತಗೊಳಿಸುತ್ತದೆ. ಆನಂತರ ಅವು ಉಸಿರಾಟದ ಮೂಲಕ ಆರೋಗ್ಯ ವ್ಯಕ್ತಿಯ ದೇಹವನ್ನು ಹೊಕ್ಕಿ ರೋಗವನ್ನು ಉಂಟು ಮಾಡುತ್ತದೆ.
  • ರೋಗ ಬರಿತ ಕ್ರಿಮಿ-ಕೀಟಗಳು ಕಚ್ಚುವುದರಿಂದ ರೋಗ ಹರಡುತ್ತದೆ. ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಾಗಿದೆ.



ಈ ಎಲ್ಲಾ ಸಮಸ್ಯೆಗಳನ್ನು ದೂರಮಡಲೆಂದೇ ಊರಿನ ಅಥವಾ ಬೇರೇ ಕಡೆಯಿಂದ ಬಂದ ಜನರಿಗೆ ಈ ಕಾಯಿಲೆ ಇದ್ದಲ್ಲಿ ಊರಿನ ಹೊರಗಿನ ದೇವಸ್ಥಾನದಲ್ಲೇ ತಂಗಿರುವ ವ್ಯವಸ್ಥೆಯಾಗುತ್ತಿತ್ತು.
ಈ ಒಂದು ಕಟ್ಟುನಿಟ್ಟಿನ ಕ್ರಮವನ್ನು ಪಾಲಿಸಲೆಂದು ದೇವರು ಭಕ್ತಿ ಎಂಬ ಗಟ್ಟಿ ನಂಬಿಕೆಯನ್ನು ಬೇಳೆಸುತ್ತದ್ದರು.



ಇಷ್ಟಕ್ಕೂ ಕೊರಾನ ಇಂದಾದ ಒಳಿತುಗಳ ಬಗ್ಗೆ ಏನಾದ್ರು ಗೊತ್ತಿದೆಯಾ ನಿಮಗೆ

  1. ಮಕ್ಕಳನ್ನು ಪಾಸ್ಮಾಡಿಸಿತು
  2. ಟ್ರಾಪಿಕ್ ಸಮಸ್ಯೆ ಬಗೆಹರಿಸಿತು.
  3. ಜನರಿಗೆ ಶುಚಿತ್ವ ಕಲಿಸಿತು.
  4. ಸರ್ಕಾರ ಕೆಲಸಮಾಡುವಂತೆ ಮಾಡಿತು.
  5. ಹಾಯ್ ಅನ್ನುತ್ತಿದ್ದ ಜನ ಈಗ ಚೆನ್ನಾಗಿದ್ದೀರ, ನಿಮ್ಮ ಮನೆಯವರು ಚೆನ್ನಾಗಿದ್ದಾರ, ನಿಮ್ಮ ತಂದೆ ತಾಯಿ ಚೆನ್ನಾಗಿದ್ದಾರ, ನಿಮ್ಮ ತಾತ ಅಜ್ಜಿ ಚೆನ್ನಾಗಿದ್ದಾರ ಅಂತಿದ್ದಾರೆ.
  6. ಎಲ್ಲಾ ಜಾತಿ ಧರ್ಮ ಮರೆಸಿ ಇಡೀ ಪ್ರಪಂಚವೆ ಒಟ್ಟುಗೂಡುವಂತೆ ಮಾಡಿತು.  ಗಂಡ ಹೆಂಡತಿ ಮಕ್ಕಳು ಕುಟುಂಬದವರೊಂದಿಗೆ ಮನೆಯಲ್ಲೆಕೂತು ಕೆಲಸ ಮಾಡುವಂತೆ ಮಾಡಿತು
  7. ಪ್ರಾಣಿ ಹತ್ಯೆ ಕಡಿಮೆ ಮಾಡಿತು.
  8. ಭಾರತ ತ್ಯಜಿಸಿದ್ದವರೆಲ್ಲ ಇಂದು ಮರಳುವಂತೆ ಮಾಡಿತು.
  9. ಸಿಕ್ಕ ಸಿಕ್ಕವರಲ್ಲಿ ಕೈ ಕುಲುಕಿ ಅಪ್ಪಿ ಮುದ್ದಾಡುವುದನ್ನು ತಪ್ಪಿಸಿತು.
  10. ಮಾಂಸಾಹಾರ ತಿನ್ನುವವರಿಗೊಂದು ಬ್ರೇಕ್ ನೀಡಿತು.
  11. ಪಬ್, ಬಾರ್, ರೆಸ್ಟೊರೆಂಟ್, ಮಾಲ್, ಥಿಯೇಟರ್, etc... ದುಂದುವ್ಯಚ್ಚಕೋರರನ್ನು ಮಟ್ಟಾ ಆಕಿತು.
  12. ನಮ್ಮ ಚಿಕ್ಕಪ್ಪನ ಮಗಳ ಗಂಡನ ಅಣ್ಣನ ಮಕ್ಕಳು ವಿದೇಶದಲ್ಲಿ ಇರುವರು ಎಂದು ಬೊಗಳೆ ಮಾತುಗಳನ್ನಾಡುತ್ತಿದ್ದ ಜನರ ಬಾಯಿಗೆ ಬೀಗ ಹಾಕಿತು.
  13. ಒಂದೇ ತಿಂಗಳಲ್ಲಿ ಶೇ ೩೦% ಜಾಗತೀಕ ಮಾಲಿನ್ಯ ಕಡಿತಗೊಂಡಿದೆ.
  14. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿತವಾಗಿದೆ.
  15. ಯುದ್ದ ಭೀತಿ ದೂರಮಾಡಿದೆ. ಪದೇ ಪದೆ ಕಾಲು ಕರೆದು ಜಗಳ ಮಾಡಿಕೊಂಡು ಬರುತ್ತಿದ್ದ ದೇಶಗಳು ತೆಪ್ಪಗಾಗಿವೆ.
ಹೀಗೆ ಹೇಳುತ್ತಾ ಕುಳಿತರೆ ಮಾತೇ ಮುಗಿಯದು ದೇವಿ ಕರೋನಳ ಮಹಿಮೆ ವರ್ಣಿಸಲು...

No comments:

Post a Comment