Monday, 18 March 2024

ಮಣ್ಣ ಕುಡಿಕೆಯಲಿಟ್ಟ ಬೆಣ್ಣೆ

 

ಮಣ್ಣ ಕುಡಿಕೆಯಲಿಟ್ಟ ಬೆಣ್ಣೆಯಂತಹಾ ಹೃದಯವಿದು, ಜೀವಂತ ಸದಾ ಎನ್ನೆದೆಯಲ್ಲೆ, ಕದಿಯಲು ಬಂದ ಕೃಷ್ಣೆಯರಿಗೆ ಸಿಗದೆ, ಸುಡಲು ಬಂದ ಸೂರ್ಯನ ಕಿರಣದಿಂದವಿತು ಹಿಮಾಲಯದ ತಪ್ಪಲು ಪ್ರದೇಶದ ದಾರಿಯ ತಾ ಹುಡುಕುತಲಿರುವಾಗ  ಮುಂಜಾನೆಯ ಎಳೆಬಿಸಿಲಿನಂತ ಕಣ್ಣನೋಟ, ಆಗತಾನೆ ಗೂಡಿನ ಬಾಗಿಲಿನಿಂದ ಹೊರಬಂದ ಹಕ್ಕಿಗಳ ನಾದ ಸ್ವರವ ಮೀರಿಸುವ ಧ್ವನಿಯ ಕೇಳಿ ರಾತ್ರಿ ಇಡೀ ಕಗ್ಗತ್ತಲು ಕವಿದು ಇದ್ದರೂ ಕಾಣದಂತಿದ್ದ 'ಪ್ರಕೃತಿ'ಯ ಚೆಲುವು, ಒಲವು ಗಳಿಗೆ ಮಣಿದು ಕರಗಿದ ಬೆಣ್ಣೆ ನೆಲದ ಪಾಲಾಗಲು ಕಾರಣವಾದದ್ದು ಮನೋರಂಜನೆಯ ಕೋಲಾಟದ ದೊಣ್ಣೆ

ಹೆಚ್. ರಾಜು ಕೋಡಿಹಳ್ಳಿ



No comments:

Post a Comment